ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಕುಂಠ ಏಕಾದಶಿ ಪ್ರಯುಕ್ತ ಡಿ. 23ರಂದು ಬೆಳಿಗ್ಗೆ ಶ್ರೀಕೃಷ್ಣ ಮೂರ್ತಿಗೆ ಶಂಖಧಾರ, ಚಕ್ರಧಾರ ಅಭಿಷೇಕ ನೆರವೇರಿದ ಬಳಿಕ ಸರ್ವಾಲಂಕಾರದೊಂದಿಗೆ ಬೆಳಿಗ್ಗೆ 5 ಗಂಟೆಗೆ ವೈಕುಂಠದ್ವಾರ ಪ್ರವೇಶ ನಡೆಸಲಾಗುವುದು. ಸಂಜೆ 6 ಗಂಟೆಗೆ ವೇಣುಗೋಪಾಲಸ್ವಾಮಿ, ಮಹಾಲಕ್ಷ್ಮಿ, ಮಹಾಗಣಪತಿ ದೇವರಿಗೆ ರಂಗಪೂಜೆಯೊಂದಿಗೆ ಸಹಸ್ರನಾಮ ಪೂರ್ವಕ ತುಳಸಿ ಅರ್ಚನೆ, ಅಷ್ಟಾವಧಾನ ಸೇವೆ, ಸರ್ವವಾದ್ಯದೊಂದಿಗೆ ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಹೇಳಿದರು.