ಶಾಲೆಯ ಮುಖ್ಯಶಿಕ್ಷಕ ಎಂ.ಎನ್.ಮಹಲಿಂಗಯ್ಯ ಮಾತನಾಡಿ, ಶಾಲೆಯಲ್ಲಿ ಒಂದರಿಂದ ಐದನೇ ತರಗತಿ ಒಟ್ಟು 15 ವಿದ್ಯಾರ್ಥಿಗಳಿದ್ದು ಪಠ್ಯಪುಸ್ತಕ ವಿತರಣೆ ಮಾಡಲಾಗಿದೆ. ಮಕ್ಕಳ ಆಗಮನ ಮೊದಲ ದಿನ ಸಿಹಿ ಅಡುಗೆ ಪಾಯಸ(ಕೀರು) ಅನ್ನ ಸಾಂಬಾರ್ ನೀಡಲಾಯಿತು. ಮೊದಲ ದಿನ ಮೂವರು ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದು ತಿಳಿಸಿದರು. ಎಸ್ಡಿಎಂಸಿ ಅಧ್ಯಕ್ಷ ಜಿ.ಎಂ.ಶ್ರೀಧರ್, ಉಪಾಧ್ಯಕ್ಷೆ ಪುಷ್ಪಾ ಮುರುಳಿ, ಸಹಶಿಕ್ಷಕಿ ಟಿ.ಕೆ.ಸಾಕಮ್ಮ, ಅಂಗನವಾಡಿ ಕಾರ್ಯಕರ್ತೆ ಕಲಾವತಿ ಹಾಗೂ ಅಂಗನವಾಡಿ ಪುಟಾಣಿಗಳು, ಪೋಷಕರು, ಗ್ರಾಮಸ್ಥರು ಹಾಜರಿದ್ದರು.