ವಾರ್ಡ್ 23ರಲ್ಲಿ ಕೊಳವೆ ಬಾವಿ ದುರಸ್ತಿ ಮಾಡಬೇಕು ಎಂದು ಸದಸ್ಯೆ ಪಾರ್ವತಮ್ಮ, ರಂಗಾಪುರ ಸರ್ವೆ 23ರ 11 ಎಕರೆ ಜಾಗದ ಸಂರಕ್ಷಣೆಗೆ ತಂತಿಬೇಲಿ ಅಳವಡಿಸಬೇಕು ಎಂದು ಸದಸ್ಯ ಬಸವರಾಜ ಒತ್ತಾಯಿಸಿದರು. ಈ ಜಾಗವನ್ನು ನಿವೇಶನವನ್ನಾಗಿ ಪರಿವರ್ತಿಸಿ, ಬಡವರಿಗೆ ಹಂಚಿಕೆ ಮಾಡಿ ಎಂದು ಭೋಜ ರಾಜ್ ಸಲಹೆ ನೀಡಿದರು. ಚರ್ಚೆಯಲ್ಲಿ ಗಿರಿಜಾ ವರ್ಮ ಪ್ರಕಾಶ, ಪರಮೇಶ ಪಾಲ್ಗೊಂಡರು.