‘ಸಿದ್ದರಾಮಯ್ಯ ದೈವಭಕ್ತರಲ್ಲ. ಅವರು ನಮ್ಮ ಪರಂಪರೆ, ಆಚರಣೆ, ಧರ್ಮದ ವಿರೋಧಿ. ಮೈಸೂರು ಅರಮನೆ, ರಾಜವಂಶಸ್ಥರ ವಿರುದ್ಧ ಸತತವಾಗಿ ಹೋರಾಟ ಮಾಡಿದ್ದಾರೆ. ಭಾರತೀಯ ಸಂಸ್ಕೃತಿ, ದೇವರು, ಹಿಂದೂ ಧರ್ಮ ಅವಹೇಳನ ಮಾಡುವ ಕೆ.ಎಸ್.ಭಗವಾನ್ ಅಂಥವರ ಪರವಾದ ನಿಲುವುಗಳನ್ನು ಸಿದ್ದರಾಮಯ್ಯ ತೆಗೆದುಕೊಳ್ಳುತ್ತಾರೆ. ಹೀಗಾಗಿ, ಅವರ ನಡೆನುಡಿ ಆಶ್ಚರ್ಯ ಎನಿಸುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.