ಈ ಕುರಿತು ಪ್ರತಿಕ್ರಿಯೆ ನೀಡಿದ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಾಸುದೇವಮೂರ್ತಿ, ‘ಈ ರೋಗವು ನಮ್ಮ ರಾಜ್ಯಕ್ಕೂ ಕಾಲಿಟ್ಟಿದೆ ಎನ್ನುವ ಮಾಹಿತಿ ಇದೆ. ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಾವಲಿ ಇದ್ದ ಮಾತ್ರಕ್ಕೆ ಜ್ವರ ಹರಡಬೇಕು ಎಂದೇನಿಲ್ಲ. ಮೊದಲೇ ಸೋಂಕಿತ ಬಾವಲಿಯೊಂದಿಗೆ ಆರೋಗ್ಯ ವಂತ ಜೀವಿ ಸಂಪರ್ಕ ಹೊಂದಿದರೆ, ಬಾವಲಿ ಕಚ್ಚಿದ ಹಣ್ಣು ಸೇವಿಸಿದರೆ ಮತ್ತು ಕುರಿ, ಹಂದಿ, ನಾಯಿ, ಬೆಕ್ಕು ಗಳಿಗೆ ಸೋಂಕು ತಗುಲಿದ್ದರೆ ಅದು ಮನುಷ್ಯರಿಗೂ ಹರಡುವ ಸಾಧ್ಯತೆ ಇರುತ್ತದೆ. ಯಾರಿಗಾದರೂ ಜ್ವರ, ತಲೆ ನೋವು, ತಲೆ ಸುತ್ತುವಿಕೆ, ಮಾನಸಿಕ ಅಸಮತೋಲನ, ಜ್ಞಾನ ತಪ್ಪು ವುದು ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು. ಬಳಸುವ ಹಣ್ಣುಗಳು ಶುದ್ಧೀಕರಿಸಬೇಕು, ಅನಾರೋಗ್ಯಕ್ಕೆ ತುತ್ತಾಗಬಹುದಾದ ಪ್ರಾಣಿಗಳೊಡನೆ ಸಂಪರ್ಕ ತಪ್ಪಿಸಿಕೊಳ್ಳುವುದು, ಸೋಂಕಿತ ಬಾವಲಿ ತೆರೆದ ಬಾವಿಗಳಿಗೆ ಬೀಳದಂತೆ ಜಾಲರಿ ಅಳವಡಿಸುವುದು, ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಗಮನ ಹರಿಸುವ ಮೂಲಕ ರೋಗಭೀತಿಯಿಂದ ಮುಕ್ತರಾಗಬಹುದು’ ಎಂದು ಹೇಳಿದರು..