ವಿಷಯ ತಿಳಿದ ಆ ಭಾಗದ ಬಿ. ಕಣಬೂರು ಗ್ರಾಮ ಪಂಚಾಯಿತಿ ಸದಸ್ಯ ಅರ್ಮುಗಂ, ದೊರೆಸ್ವಾಮಿ, ಭಾಸ್ಕರ್ ಹಾಗೂ ಮುಸ್ಲಿಂ ಯುವಕರು ರಂಗಸ್ವಾಮಿಯ ಕುಟುಂ ಬದವರೊಂದಿಗೆ ಸೇರಿ ಅಂತ್ಯಸಂಸ್ಕಾರ ನಡೆಸಲು ಮುಂದಾದರು. ಅಕ್ಷರನಗರ ಸುತ್ತಮುತ್ತಲಿನ ಮುಸ್ಲಿಂ ಸಮುದಾಯದ ಆರೀಫ್, ಮಹಮ್ಮದ್, ಸೈಯದ್, ಜಬ್ಬಾರ್, ಶಫೀಖ್, ಸಿದ್ದೀಕ್, ಸಲಾಂ, ನಾಸೀರ್ ಹುಸೇನ್, ಮಹಮ್ಮದ್, ಅಶ್ರಫ್ ಮತ್ತಿತರರು ಹಿಂದೂ ರುದ್ರಭೂಮಿಗೆ ತೆರಳಿ, ಗುಂಡಿ ತೋಡಿ ಅಂತ್ಯ ಸಂಸ್ಕಾರಕ್ಕೆ ಕೈಜೋಡಿಸಿದರು.