ಜಿಲ್ಲೆಯಿಂದ ಚೆನ್ನೈ, ಹೈದರಾಬಾದ್, ಮುಂಬೈ ಮತ್ತಿತರ ಹೊರರಾಜ್ಯಗಳ ನಗರಗಳಿಗೆ ನೇರ ಬಸ್ ಸಂಚಾರ ಆರಂಭಿಸಬೇಕು. ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸಬೇಕು. ಜಿಲ್ಲೆಗೆ ಹೆಚ್ಚು ವೋಲ್ವೊ ಬಸ್ಗಳನ್ನು ಒದಗಿಸಬೇಕು. ರೈತರು, ವ್ಯಾಪಾರಿಗಳು, ಅಂಗವಿಕಲರು, ವೃದ್ಧರು, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಗ್ರಾಮೀಣ ಸಾರಿಗೆಗೆ ಹೆಚ್ಚು ಆದ್ಯತೆ ನೀಡಬೇಕು ಎಂಬುದು ಜಿಲ್ಲೆಯ ಜನರ ಬೇಡಿಕೆಯಾಗಿದೆ.