ಈ ಬಗ್ಗೆ ಕ್ರಮ ಕೈಗೊಳ್ಳುವಂತೆಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಇಒಗೆ, ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಲಾಗಿದೆ. ಭೂಮಾಪನ ಇಲಾಖೆ ಅಧಿಕಾರಿಗಳು ಅಳತೆಗೆ ಬಂದು ಮುಳ್ಳು ಬೆಳೆದಿರುವುದನ್ನು ನೋಡಿ, ಸ್ವಚ್ಛ ಮಾಡಿದರೆ ಮಾತ್ರ ಅಳತೆ ಮಾಡುವುದಾಗಿ ಹೇಳಿ ಹೋದರು. ಪಂಚಾಯಿತಿಯವರು ಸ್ವಚ್ಛತೆ ಮಾಡಿಲ್ಲ. ಭೂಮಾಪನ ಇಲಾಖೆಯವರು ಬರುತ್ತಿಲ್ಲ. ಹೀಗಾಗಿ ಸ್ಮಶಾನದ ಜಾಗವಿದ್ದರೂ ಶವಸಂಸ್ಕಾರಕ್ಕೆ ಬಳಸದ ಪರಿಸ್ಥಿತಿ ಇದೆ ಎಂದು ಗ್ರಾಮದ ದಲಿತ ಮುಖಂಡ ಎಂ. ರಾಜಣ್ಣ ದೂರಿದರು.