<p><strong>ಮಂಗಳೂರು: </strong>ಸಂತ ಅಂತೋನಿ ಆಶ್ರಮದ ವತಿಯಿಂದ ಸೇಂಟ್ ಆಂತೋನಿಯವರ ಪುಣ್ಯ ಸ್ಮರಣೆ ಹಬ್ಬವನ್ನು ಇದೇ 15ರಂದು ಮಿಲಾಗ್ರಿಸ್ ಚರ್ಚ್ನ ಆವರಣದಲ್ಲಿ ಆಚರಿಸಲಾಗುವುದು ಎಂದು ಫಾ.ಇನಿಲ್ ಡಿ’ಸೋಜ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.</p>.<p>ಇದೇ 6 ರಂದು 9 ದಿನಗಳ ನವೇನ ಪ್ರಾರ್ಥನೆ ಆರಂಭಗೊಳ್ಳುವುದು. ಅದೇ ದಿನ ಸಂಜೆ 4 ಗಂಟೆಗೆ ಸಂತ ಅಂತೋನಿ ಪ್ರತಿಮೆಯ ಮೆರವಣಿಗೆ ಜೆಪ್ಪು ಸೇಂಟ್ ಆಶ್ರಮದಿಂದ ಕಂಕನಾಡಿ ವೃತ್ತ, ಫಳ್ನೀರ್ ಕಡೆಯಿಂದ ಮಿಲಾಗ್ರಿಸ್ ಚರ್ಚ್ಗೆ ತಲುವುತ್ತದೆ. ಶಿವಮೊಗ್ಗ ಧರ್ಮಪ್ರಾಂತ್ಯದ ಫಾ. ಫ್ರಾಂಕ್ಲಿನ್ ಡಿ’ಸೋಜ ಧ್ವಜಾರೋಹಣ ಮತ್ತು ಬಲಿಪೂಜೆ ನೆರವೇರಿಸುವರು ಎಂದರು.</p>.<p>ನವೇನ ಪ್ರಾರ್ಥನೆಯ ಸಮಯದಲ್ಲಿ 9 ವಿವಿಧ ವರ್ಗಗಳ ಜನರಿಗಾಗಿ ಪ್ರಾರ್ಥಿಸಲಾಗುವುದು. ಬೆಳಿಗ್ಗೆ 8 ಗಂಟೆಗೆ ರೋಗಿಗಳಿಗಾಗಿ ಡಾ. ಪಿಯುಸ್ ಡಿಸೋಜ, ಧಾರ್ಮಿಕರಿಗಾಗಿ ಬಲಿಪೂಜೆಯನ್ನು ಅರ್ಪಿಸುವರು. ಸಂಜೆ 4.30ಕ್ಕೆ ಕಲ್ಲಿಕೋಟೆ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ವರ್ಗಿಸ್ ಚಕ್ಕಾಲಕಲ್ ಮಲಯಾಳಂ ಭಾಷೆಯಲ್ಲಿ ಬಲಿಪೂಜೆ ಅರ್ಪಿಸುವರು. ಸಂಜೆ 6 ಗಂಟೆಗೆ ಮಂಗಳೂರು ಧರ್ಮಾಧ್ಯಕ್ಷ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಬಲಿಪೂಜೆ ಅರ್ಪಿಸುವರು ಎಂದರು. ಆಡಳಿತಾಧಿಕಾರಿ ಫಾ. ಪ್ರಾನ್ಸಿಸ್ ಡಿಸೋಜ, ಧರ್ಮಪ್ರಾಂತ್ಯದ ಮಾಧ್ಯಮ ಸಮಿತಿಯ ಕಾರ್ಯದರ್ಶಿ ವಿನ್ಸೆಂಟ್ ಮಸ್ಕರೇನಸ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು: </strong>ಸಂತ ಅಂತೋನಿ ಆಶ್ರಮದ ವತಿಯಿಂದ ಸೇಂಟ್ ಆಂತೋನಿಯವರ ಪುಣ್ಯ ಸ್ಮರಣೆ ಹಬ್ಬವನ್ನು ಇದೇ 15ರಂದು ಮಿಲಾಗ್ರಿಸ್ ಚರ್ಚ್ನ ಆವರಣದಲ್ಲಿ ಆಚರಿಸಲಾಗುವುದು ಎಂದು ಫಾ.ಇನಿಲ್ ಡಿ’ಸೋಜ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.</p>.<p>ಇದೇ 6 ರಂದು 9 ದಿನಗಳ ನವೇನ ಪ್ರಾರ್ಥನೆ ಆರಂಭಗೊಳ್ಳುವುದು. ಅದೇ ದಿನ ಸಂಜೆ 4 ಗಂಟೆಗೆ ಸಂತ ಅಂತೋನಿ ಪ್ರತಿಮೆಯ ಮೆರವಣಿಗೆ ಜೆಪ್ಪು ಸೇಂಟ್ ಆಶ್ರಮದಿಂದ ಕಂಕನಾಡಿ ವೃತ್ತ, ಫಳ್ನೀರ್ ಕಡೆಯಿಂದ ಮಿಲಾಗ್ರಿಸ್ ಚರ್ಚ್ಗೆ ತಲುವುತ್ತದೆ. ಶಿವಮೊಗ್ಗ ಧರ್ಮಪ್ರಾಂತ್ಯದ ಫಾ. ಫ್ರಾಂಕ್ಲಿನ್ ಡಿ’ಸೋಜ ಧ್ವಜಾರೋಹಣ ಮತ್ತು ಬಲಿಪೂಜೆ ನೆರವೇರಿಸುವರು ಎಂದರು.</p>.<p>ನವೇನ ಪ್ರಾರ್ಥನೆಯ ಸಮಯದಲ್ಲಿ 9 ವಿವಿಧ ವರ್ಗಗಳ ಜನರಿಗಾಗಿ ಪ್ರಾರ್ಥಿಸಲಾಗುವುದು. ಬೆಳಿಗ್ಗೆ 8 ಗಂಟೆಗೆ ರೋಗಿಗಳಿಗಾಗಿ ಡಾ. ಪಿಯುಸ್ ಡಿಸೋಜ, ಧಾರ್ಮಿಕರಿಗಾಗಿ ಬಲಿಪೂಜೆಯನ್ನು ಅರ್ಪಿಸುವರು. ಸಂಜೆ 4.30ಕ್ಕೆ ಕಲ್ಲಿಕೋಟೆ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ವರ್ಗಿಸ್ ಚಕ್ಕಾಲಕಲ್ ಮಲಯಾಳಂ ಭಾಷೆಯಲ್ಲಿ ಬಲಿಪೂಜೆ ಅರ್ಪಿಸುವರು. ಸಂಜೆ 6 ಗಂಟೆಗೆ ಮಂಗಳೂರು ಧರ್ಮಾಧ್ಯಕ್ಷ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಬಲಿಪೂಜೆ ಅರ್ಪಿಸುವರು ಎಂದರು. ಆಡಳಿತಾಧಿಕಾರಿ ಫಾ. ಪ್ರಾನ್ಸಿಸ್ ಡಿಸೋಜ, ಧರ್ಮಪ್ರಾಂತ್ಯದ ಮಾಧ್ಯಮ ಸಮಿತಿಯ ಕಾರ್ಯದರ್ಶಿ ವಿನ್ಸೆಂಟ್ ಮಸ್ಕರೇನಸ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>