‘ವಿದ್ಯಾರ್ಥಿಗಳ ಸಾಧನೆಗೆ ನೀರೆರೆದು ಪೋಷಿಸಬೇಕಾದುದು ಶಿಕ್ಷಕರ ಮತ್ತು ರಕ್ಷಕರ ಕರ್ತವ್ಯ. ‘ಶಿಕ್ಷಕ’ ಎಂದರೆ ಶಿಷ್ಟಾಚಾರವುಳ್ಳ ಕ್ಷ -ಕಿರಣದಂತಿರುವ-ಕರ್ಮಯೋಗಿ. ಆತನ ಗುಣ, ನಡತೆ, ಮಾತುಗಳೆಲ್ಲವೂ ವಿದ್ಯಾರ್ಥಿಗಳಿಗೆ ಅನುಕರಣೀಯವಾಗಿರಬೇಕು. ನುರಿತ ಶಿಕ್ಷಕನೆಂದರೆ ತಾನು ಬೋಧಿಸುವ ವಿಷಯದ ಬಗೆಗಿನ ನೈಪುಣ್ಯತೆಯನ್ನು ವಿದ್ಯಾರ್ಥಿಗೆ ಅರ್ಥವಾಗುವಂತೆ ಬೋಧಿಸುವಾತ. ಶಿಕ್ಷಕನಿಗೆ ವಿಷಯದ ಪರಿಜ್ಞಾನವಿದ್ದರೂ ವಿದ್ಯಾರ್ಥಿಗೆ ತಲು ಪಿಸಲು ಸಾಧ್ಯವಾಗದಿದ್ದರೆ ಏನೂ ಪ್ರಯೋಜನವಿಲ್ಲ. ಅಲ್ಲದೆ ಬದಲಾಗುತ್ತಿರುವ ಸಮಾಜ ಹಾಗೂ ಶಿಕ್ಷಣ ಪದ್ಧತಿಗನುಗುಣವಾಗಿ ಬೋಧಿಸದಿದ್ದಲ್ಲಿ ಆತ ಪರಿಪೂರ್ಣ ವೆನಿಸಿಕೊಳ್ಳಲಾರ’ ಎಂದರು. ಪ್ರಾಂಶುಪಾಲ ಡಾ.ನವೀನ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಜೀವ ನದಲ್ಲಿ ನಿರ್ದಿಷ್ಟ ಗುರಿಯೊಂದಿಗೆ, ಪಾಠ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು, ವಿದ್ಯಾ ಭ್ಯಾಸದ ಹಂತದಲ್ಲಿ ಕಣ್ಣು, ಕಿವಿ, ಮೆದುಳು ಕ್ರಿಯಾಶೀಲವಾಗಿದ್ದರೆ ಪಾಠ ಪ್ರವಚನಗಳನ್ನು ಅರ್ಥೈಸಿಕೊಳ್ಳುವುದರೊಂದಿಗೆ ಸಾಧನೆ ಸಾಧ್ಯ ಎಂದರು.