3 ಕೆ.ಜಿ. ಬಂಗಾರ ಒಯ್ಯಲು ₹13 ಲಕ್ಷದೊಂದಿಗೆ ಗ್ರಾಮದ ಮಾವಿನತೋಟಕ್ಕೆ ಬರುವಂತೆ ಆರೋಪಿಗಳು ಹರೀಶ್ಗೆ ತಿಳಿಸಿದ್ದಾರೆ. ₹ 3 ಲಕ್ಷದೊಂದಿಗೆ ಸ್ಥಳಕ್ಕೆ ಬಂದ ಹರೀಶ್ ಮೇಲೆ ಆರೋಪಿಗಳು ತೀವ್ರವಾಗಿ ಹಲ್ಲೆ ನಡೆಸಿ, ಹಣದೊಂದಿಗೆ ಪರಾರಿಯಾಗಿದ್ದಾರೆ. ಸಮೀಪದಲ್ಲೇ ಇದ್ದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನಿತರ ಆರೋಪಿಗಳಾದ ಹೆಬ್ಬಳಗೆರೆ ಗ್ರಾಮದ ತೀರ್ಥಪ್ಪ, ಗಂಗಪ್ಪ, ಓಂಕಾರಿ, ಗೆದ್ಲಹಟ್ಟಿಯ ಶಂಕರಪ್ಪ, ಲಕ್ಷ್ಮಣ, ಧರ್ಮಪ್ಪ, ಮಹೇಶ್, ಸಂದೀಪ್, ಅಶೋಕ ಹಾಗೂ ಚಿಕ್ಕಬ್ಬಿಗೆರೆಯ ವೆಂಕಟೇಶ್ ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.