ಕಳೆದ ಒಂದೆರಡು ತಿಂಗಳಿನಿಂದ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರದಾದ್ಯಂತ ಸಂಚರಿಸಿದ್ದರು. ಮಂಗಳವಾರ ಮತದಾನ ಮುಗಿದಿದ್ದರಿಂದ ಬುಧವಾರ ಹಾಯಾಗಿ ಕಾಲ ಕಳೆದರು. ಬೆಳಿಗ್ಗೆ ತಮ್ಮ ವಿಧಾನಸಭಾ ಕ್ಷೇತ್ರ ಶಿಗ್ಗಾವಿಗೆ ತೆರಳಿ ಪಕ್ಷದ ಕಾರ್ಯಕರ್ತರು, ಮುಖಂಡರೊಂದಿಗೆ ಕೆಲ ಸಮಯ ಕಳೆದು, ಮಧ್ಯಾಹ್ನ ಹುಬ್ಬಳ್ಳಿಯ ಅಶೋಕನಗರದಲ್ಲಿರುವ ತಮ್ಮ ಮನೆಗೆ ವಾಪಸ್ಸಾದರು. ವಿಶ್ರಾಂತಿ ಪಡೆದರು.