ತಾಲ್ಲೂಕು ವ್ಯಾಪ್ತಿಯಲ್ಲಿ ಬರಿದಾಗಿರುವ ಕೆರೆಗಳಿಗೆ, ಹೊಲಗಳಿಂದ ನೀರು ಹರಿದು ಬರುವ ಕಾಲುವೆಗಳ ಹೂಳೆತ್ತುವ ಕಾಮಗಾರಿಗಳು ಕುಂಟುತ್ತ ಸಾಗಿದೆ. ಚಿಕ್ಕನರ್ತಿ, ಬಾಗವಾಡ, ಯರಿನಾರಾಯಣಪುರ, ಬೆನಕನಹಳ್ಳಿ, ಗ್ರಾಮಗಳ ಕೆರೆಯಲ್ಲಿನ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಕುಂದಗೋಳ ಪಟ್ಟಣದ ಐತಿಹಾಸಿಕ ಹಿನ್ನೆಲೆಯ ಅಗಸಿಹೊಂಡದ ನೀರು ಸ್ಥಳೀಯರ ಬೇಜವಾಬ್ದಾರಿಯಿಂದ ಮಲಿನವಾಗಿದೆ.