ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ಕೆಎಲ್ಇ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಆವರಣದಲ್ಲಿ ಬುಧವಾರ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಬೈಕ್ ಮತ್ತು ಕಾರ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಧಾರವಾಡ ಉತ್ತರ ವಿಭಾಗದ ಸಾರಿಗೆ ಇಲಾಖೆಯ ಅಪರ ಆಯುಕ್ತ ಮಾರುತಿ ಸಾಂಬ್ರಾಣಿ ರ್ಯಾಲಿಗೆ ಚಾಲನೆ ನೀಡಿದರು. ಹೊಸೂರು ಮಾರ್ಗವಾಗಿ ವಿದ್ಯಾನಗರದ ಬಿವಿಬಿ ಕಾಲೇಜಿನವರೆಗೆ ರ್ಯಾಲಿ ನಡೆಯಿತು.
ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತೆ ಓಂಕಾರೇಶ್ವರಿ ಎಂ.ಪಿ., ಸಾರಿಗೆ ಇಲಾಖೆ ಅಧಿಕಾರಿ ಕೆ.ದಾಮೋದರ ಮತ್ತು ಭೀಮನಗೌಡ ಪಾಟೀಲ, ಕೆಎಲ್ಇ ಐಟಿ ಪ್ರಾಚಾರ್ಯ ಪ್ರೊ.ಶರದ ಜೋಶಿ, ರೋಟರಿ ಕ್ಲಬ್ ಹುಬ್ಬಳ್ಳಿ ಅಧ್ಯಕ್ಷ ನಾಗರಾಜ ಶೆಟ್ಟಿ, ಪ್ರಕಾಶ ಇರಕಲ್, ಶೇಖರಯ್ಯ ಮಠಪತಿ, ಗುರುಸಾಲಿಮಠ, ಶಂಕರ ಹಿರೇಮಠ ಪಾಲ್ಗೊಂಡಿದ್ದರು.