ಕಚೇರಿಯ ಮುಂಭಾಗದ ಮೂಲೆ ಯಲ್ಲಿ ಆಳೆತ್ತರಕ್ಕೆ ಹುಲ್ಲು ಬೆಳೆದಿದೆ. ಅಕ್ಕ-ಪಕ್ಕದಲ್ಲಿ ಕಸ ಸಂಗ್ರಹವಾಗಿದೆ. ಹಿಂಭಾಗ ಹುಲ್ಲುಗಾವಲಿನಂತಾಗಿದೆ. ಒಳ ಆವರಣದಲ್ಲಿ ಮಳೆ ನೀರು ನಿಂತು ಹಸಿರು ಬಣ್ಣಕ್ಕೆ ತಿರುಗಿದೆ. ಕಿಟಕಿ ಗಾಜುಗಳು ಒಡೆದಿವೆ. ಕಾಗದ, ಚಹಾ ಕಪ್ಗಳು ಎಲ್ಲೆಂದರಲ್ಲಿ ಬಿದ್ದಿವೆ. ಪೇಪರ್, ಪ್ಲಾಸ್ಟಿಕ್ ಇತ್ಯಾದಿಗಳನ್ನು ಸುಟ್ಟಿರುವುದು ಕಂಡು ಬರುತ್ತದೆ.
‘ಶೌಚಾಲಯಕ್ಕೆ ಹೋಗುವ ದಾರಿಯಲ್ಲಿ ಕಸ ತುಂಬಿದ್ದು, ತುಕ್ಕು ಹಿಡಿದ ವಾಹನವೊಂದನ್ನು ನಿಲ್ಲಿಸಲಾಗಿದೆ. ಶೌಚಾಲಯದ ಮುಂದೆ ಪಾಚಿ ಕಟ್ಟಿದೆ. ಇದನ್ನೇ ಜನರು ಅನಿವಾರ್ಯವಾಗಿ ಬಳಸುವಂತಾಗಿದೆ. ಕಚೇರಿಯ ಸಿಬ್ಬಂದಿ ಬಳಸುವ ಶೌಚಾಲಯದ ಸ್ಥಿತಿ ಕೂಡ ಹೀಗೇ ಇದೆ’ ಎನ್ನುತ್ತಾರೆ ಶಿರೂರು ಗ್ರಾಮದ ರಾಮಪ್ಪ.
ಅಡ್ಡಾದಿಡ್ಡಿ ವಾಹನ ನಿಲುಗಡೆ: ಕಚೇರಿ ಮುಂದೆ ವಾಹನಗಳ ನಿಲುಗಡೆಗೆ ಜಾಗವಿದ್ದರೂ, ಜನರು ಸರಿಯಾಗಿ ಪಾರ್ಕಿಂಗ್ ಮಾಡುವುದಿಲ್ಲ’ ಎಂದು ನಾಗರಾಜ ಬೇಸರ ವ್ಯಕ್ತಪಡಿಸಿದರು.