ತಮ್ಮೊಂದಿಗೆ, ತಮ್ಮ ನೆರೆಹೊರೆಯ ಮಹಿಳೆಯರನ್ನೂ ಬೆಳೆಸಬೇಕು ಎಂಬ ಉದ್ದೇಶದಿಂದ ಕೆಲಸ ಮಾಡಿದವರು ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ತೀರ್ಥ ಗ್ರಾಮದ ಬೀಬಿಜಾನ್. ರಾಗಿ ಸೇರಿದಂತೆ ಸಿರಿಧಾನ್ಯ ಬೆಳೆಯುವ ಮಹಿಳೆಯರನ್ನು ಒಗ್ಗೂಡಿಸಿ, ಸಹಜ ಸಮೃದ್ಧ ಸಂಸ್ಥೆಯ ಜೊತೆಗೆ ಇವರು ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿಯೂ ಬೀಬಿಜಾನ್ ಪಾತ್ರ ಉಲ್ಲೇಖಾರ್ಹ. ಮಹಿಳೆಯರು ಒಂದು ಗುಂಪಾಗಿ ಕೆಲಸ ಮಾಡಿದರೆ ಏನೆಲ್ಲ ಸಾಧಿಸಬಹುದು, ಏನೆಲ್ಲ ಬದಲಾವಣೆ ತರಬಹುದು ಎಂಬುದರ ಪ್ರೇರಣಾಕಥನ ಈ ವಿಡಿಯೊದಲ್ಲಿದೆ.