ಹಿರಣ್ಯಕಶಿಪು, ದುರ್ಯೋಧನ, ಶಕುಂತಲೆ, ಗಾಂಧಾರಿ, ಸುಭಾಶ್ಚಂದ್ರ ಬೋಸ್ ಪಾತ್ರಗಳು ವೇದಿಕೆ ಮೇಲೇರಿದಾಗ ಸಭಾಂಗಣದಲ್ಲಿ ಶಿಳ್ಳೆ–ಚಪ್ಪಾಳೆಯ ಸದ್ದು ಜೋರಾಯಿತು. ‘ಕಬಾಲಿ’ ವೇಷಧಾರಿ ಬಂದಾಗ ಸಭಾಂಗಣದಲ್ಲಿದ್ದವರು ರೋಮಾಂಚನಗೊಂಡರು. ಶ್ವೇತಾ ಶಿರಬಡಗಿ, ಕಾರ್ತಿಕ್ ರಾಯ್ಕರ್, ಸುನೀಲ, ನಿತೇಶ್ ಡಂಬಳ, ಅಂಜಲಿದೇವಿ, ವರ್ಷಾ ಮಾನೆ, ಮಮತಾ ಕುಲಕರ್ಣಿ, ಮುತ್ತುರಾಜ್ ವೈವಿಧ್ಯಮಯ ಪಾತ್ರಗಳಲ್ಲಿ ಗಮನ ಸೆಳೆದರು.