ಭಾರತೀಯ ಸಂಸ್ಕೃತಿಯಲ್ಲಿ ಅಕ್ಷಯ ತೃತೀಯ ಅಥವಾ ಬಸವ ಜಯಂತಿ ದಿನದಂದು ಚಿನ್ನ ಖರೀದಿಸಿದರೆ ಒಳ್ಳೆಯದು ಎಂಬ ನಂಬಿಕೆ ಇದೆ. ಇದರಿಂದಾಗಿ ಮುಂಗಡವಾಗಿ ಹಣ ನೀಡಿ ವಿವಿಧ ವಿನ್ಯಾಸದ ಒಡವೆಗಳನ್ನು ಸಿದ್ದಪಡಿಸಲು ಗೃಹಣಿಯರು ಸೂಚಿಸಿದ್ದು, ಅಕ್ಷಯ ತೃತೀಯ ದಿನದಂದು ಪಡೆಯುತ್ತಾರೆ. ಕಾರ್ಪೊರೇಟ್ ಕಂಪನಿಗಳೂ ವಿವಿಧ ರೀತಿಯ ರಿಯಾಯಿತಿ ನೀಡುವ ಮೂಲಕ ಜನರನ್ನು ಆಕರ್ಷಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ವ್ಯಾಪಾರವು ಹೆಚ್ಚಾಗುತ್ತಿದೆ.