ಹೊಯ್ಸಳೇಶ್ವರ ದೇವಾಲಯ ಮುಂಭಾಗದ ಕಾಂಪೌಂಡ್ ಪಕ್ಕ ದ್ವಿಚಕ್ರ ವಾಹನ ನಿಲುಗಡೆ ಸ್ಥಳದಲ್ಲಿ ನೀರು ನಿಂತು ಕೆಸರು ಗದ್ದೆಯಾಗಿತ್ತು.
ಜೋರು ಮಳೆಗೆ ಹಳ್ಳ ಹರಿದಿದ್ದರಿಂದ ದ್ವಾರಸಮುದ್ರ ಕೆರೆ, ಬಿದುರುಕೆರೆ, ತಿಮ್ಮನಹಳ್ಳಿ ಕಟ್ಟೆಯ ಗುಂಡಿಗಳಲ್ಲಿ ನೀರು ತುಂಬಿಕೊಂಡಿದೆ. ಅಧಿಕ ಉಷ್ಣಾಂಶದಿಂದ ಭೂಮಿ ಒಣಗಿ ನಿಂತಿದೆ. ಕೆರೆ ಕಟ್ಟೆಗೆ ಬರುತ್ತಿರುವ ನೀರು ಭೂಮಿಯಲ್ಲಿ ಇಂಗುತ್ತಿದೆ. ಜೋರು ಮಳೆ ಆಗಾಗ್ಗೆ ಬಂದರೆ ಕೆರೆ ಕಟ್ಟೆಯಲ್ಲಿ ನೀರು ಕಾಣಬಹುದು ಎಂದು ಕೆ.ಮಲ್ಲಾಪುರದ ರೈತ ಎಂ.ಕೆ. ಹುಲೀಗೌಡ ಹೇಳಿದರು.