‘ವಧಾಗೃಹದ ಶೆಡ್ನಿಂದ ಜಾನುವಾರುಗಳ ರಕ್ತ ಮತ್ತು ತ್ಯಾಜ್ಯ ಪಕ್ಕದಲ್ಲಿರುವ ಚರಂಡಿ ಮೂಲಕ ಕೆರೆ ಸೇರುತ್ತಿತ್ತು. ದುರ್ವಾಸನೆ ಮತ್ತು ಜಲಮಾಲಿನ್ಯ ಉಂಟಾಗಿ ರೋಗ ಹರಡುತ್ತಿತ್ತು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಿತ್ತು. ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿ ಆದೇಶದ ಮೇರೆಗೆ ಶೆಡ್ ಅನ್ನು ತೆರವುಗೊಳಸಲಾಗಿದೆ’ ಎಂದು ಅವರು ತಿಳಿಸಿದರು.
ಪುರಸಭೆಯ ಮುಖ್ಯಾಧಿಕಾರಿ ಕೆ.ಎನ್. ಹೇಮಂತ್, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸೋಮಶೇಖರ್, ವಿಸ್ತರಣಾಧಿಕಾರಿ ಡಾ. ಆನಂದ್ ಕುಮಾರ್, ಇನ್ಸ್ಪೆಕ್ಟರ್ ರಘುಪತಿ, ಪಿಎಸ್ಐ ಭರತ್ರೆಡ್ಡಿ ಭಾಗವಹಿಸಿದ್ದರು.