ಪರ್ಸೆಂಟೇಜ್ ಸರ್ಕಾರ ಎಂಬ ಟೀಕೆಗೆ ಕಿಡಿಕಾರಿದ ರೇವಣ್ಣ, ‘ಪರ್ಸೆಂಟೇಜ್ ಬಗ್ಗೆ ನನಗೇನು ಗೊತ್ತಿಲ್ಲ. ಅದೇನಿದ್ದರೂ ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರನ್ನ ಕೇಳಿದರೆ ಹೇಳುತ್ತಾರೆ. ನೋಟು ಎಣಿಸುವ ಮಷಿನ್ ಅನ್ನು ಅವರೇ ಇಟ್ಟುಕೊಂಡಿದ್ದಾರೆ. ಮೋದಿ ಅವರಿಗೆ ರೈತರ ಸಾಲ ಮನ್ನಾ ಮಾಡುವುದಕ್ಕೆ ಆಗುತ್ತಿರಲಿಲ್ಲವೇ. ನಮಗೆ ಪರ್ಸೆಂಟೇಜ್ ಪಡೆದು ಅಭ್ಯಾಸ ಇಲ್ಲ. ದೇವೇಗೌಡರ ಬಳಿ ಉಳಿದಿವುದು ಬರೀ ಜುಬ್ಬಾ, ಪಂಚೆ ಎಂದರು.