ವಿದ್ಯಾರ್ಥಿ ಸುಶ್ಮಿತಾ ಮಾತನಾಡಿ, ವಿವಿಧ ಬೆಳೆಗಳಾದ ರಾಗಿ, ಜೋಳ, ಶುಂಠಿ ಹಾಗೂ ವಿವಿಧ ಜಾತಿಯ ಹಣ್ಣಿನ ಮರಗಳಿಗೆ ಮಾತ್ರವಲ್ಲದೆ ತೆಂಗಿನ ಮರಗಳಿಗೆ ಹಲವು ಬಗೆಯ ಸಿಂಪರಣಾ ಉಪಕರಣಗಳು ಮತ್ತು ಧೂಳೀಕರಣಗಳನ್ನು ಬಳಸಬಹುದು. ಉಪಕರಣಗ ಬಳಸಿ ಕಡಿಮೆ ಸಮಯ ಮತ್ತು ವೆಚ್ಚದಲ್ಲಿ ಹೆಚ್ಚಿನ ಬೆಳೆಗಳಿಗೆ ಸಿಂಪಡಿಸಬಹುದು. ಕೂಲಿಗಳ ಖರ್ಚು ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದರು.