‘ಜನ ಸೇವಕರೇ, ಇಂದು ‘ಮಾಲೀಕ’ರಂತೆ ನಡೆದುಕೊಳ್ಳುತ್ತಿದ್ದಾರೆ. ಅಂದು ಹಣವಂತರು ಅನ್ಯಾಯ ಮುಚ್ಚಿ ಹಾಕಲು ಸಾಕ್ಷಿಗಳನ್ನು ಖರೀದಿಸುತ್ತಿದ್ದರೆ, ಇಂದು ಜಡ್ಜ್, ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಖರೀದಿ ಮಾಡುತ್ತಿದ್ದಾರೆ. ಸಮಾಜದ ಬದಲಾವಣೆಯಿಂದ ಮಾತ್ರ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಲ್ಲಿ ಬದಲಾವಣೆ ಸಾಧ್ಯ. ಅದಕ್ಕಾಗಿ ಹಣ, ಜಾತಿ, ಧರ್ಮ, ಭಾಷೆ ಮತ್ತಿತರ ಅಮಲಿನಲ್ಲಿ ನಮ್ಮ ವೋಟ್ ಅನ್ನು ಮಾರುವುದನ್ನು ಬಿಡಬೇಕು. ತೃಪ್ತಿ ಮತ್ತು ಮಾನವೀಯತೆಯು ನಮ್ಮ ಬದುಕಾಗಬೇಕು’ ಎಂದರು.