ಪ್ರಚಾರ ಸಭೆ: ಕಾಂಗ್ರೆಸ್ ಅಭ್ಯರ್ಥಿ ಎಂ.ವೈ.ಪಾಟೀಲ ಅವರ ಬೆಂಬಲಿಗರೊಂದಿಗೆ ತಾಲ್ಲೂಕಿನ ಅವರಳ್ಳಿ, ಗೊಬ್ಬುರವಾಡಿ, ವಡ್ಡಳ್ಳಿ, ಹಾವನೂರ, ಬಿದನೂರ, ಅವರಳ್ಳಿ, ಗೊಬ್ಬುರ(ಕೆ) ಗ್ರಾಮಗಳಲ್ಲಿ ಪ್ರಚಾರ ಸಭೆ ನಡೆಸಿದರು. ಮುಖಂಡರಾದ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ಪಾಟೀಲ, ಕಾರ್ಯದರ್ಶಿ ಶರಣು ಕುಂಬಾರ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಶಿರಸಗಿ, ಸಿದ್ದಾರ್ಥ ಬಸರಿಗಿಡದ, ಪ್ರಕಾಶ ಜಮಾದಾರ, ರಾಜು ಅವರಳ್ಳಿ, ಅರುಣಕುಮಾರ ಪಾಟೀಲ ಗೊಬ್ಬುರ, ಶಿವಶಂಕರ ಪಾಸೋಡಿ, ಸುರೇಶ ಅವಟೆ, ವಿಶ್ವನಾಥ ಕಾರನಾಡ ಇದ್ದರು.