ಕಲಬುರಗಿಯಿಂದ–ಯಾದಗಿರಿಗೆ ವ್ಯಾಪಾರಕ್ಕೆ ಸ್ವಿಫ್ಟ್ ಕಾರಿನಲ್ಲಿ ತೆರಳುತ್ತಿದ್ದರು. ಶಹಾಬಾದ್ ಸಮೀಪದ ಶಂಕರವಾಡಿ ಕಾಗಿಣಾ ನದಿಗೆ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿ, ತಮ್ಮ ಸ್ಕಾರ್ಪಿಯೋ ವಾಹನದಲ್ಲಿ ಕಲಬುರಗಿಗೆ ಹಿಂತಿರುಗುತ್ತಿದ್ದ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಹಣಮಂತ, ಸಹಾಯಕ ಎಂಜಿನಿಯರ್ ಶರಣು ಅವರಿದ್ದ ವಾಹನವನ್ನು ಚಾಲಕ ಹರೀಶ ತೀವ್ರ ನಿರ್ಲಕ್ಷ್ಯದಿಂದ ವೇಗವಾಗಿ ಓಡಿಸಿ, ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ಪರಿಣಾಮ ಕಾರು ಚಾಲಕ ಜಾಹೀದ್ ಅಯ್ಯಬ್ ಖಾನ್ ಪಠಾಣ(30) ಸ್ಥಳದಲ್ಲಿಯೇ ಮೃತ ಪಟ್ಟರೆ, ಶಾಕೀರ ವಾಜೀದ ಅಲಿ (20) ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ.