ಕಮಲಾಪುರ: ಪಟ್ಟಣ ಹೊರವಲಯದ ಚಾರಕಮಾನ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಪ್ರಯಾಣಿಕರು ಪಾರಾಗಿದ್ದಾರೆ.
ಹೈದರಾಬಾ್ನ ಬಂಜಾರ ಹಿಲ್ಸ್ ನಿವಾಸಿ ಮೊಹಮ್ಮದ್ ಜಲೀಲ್ ಅವರಿಗೆ ಸೇರಿದ್ದ ಫೋರ್ಡ್ ಫೀಸ್ಟಾ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಎರಡು ದಿನಗಳ ಹಿಂದೆ ಕಲಬುರಗಿಗೆ ಆಗಮಿಸಿದ್ದ ಇವರು ಚಾಲಕ ಸೇರಿ ಐವರು ಕೂಡಿ ಹೈದರಾಬಾದ್ಗೆ ತೆರಳುತ್ತಿದ್ದರು.
ಕಲಬುರಗಿಯ ಮಿಲ್ಲತ್ ನಗರದ ಮೊಹಮ್ಮದ್ ಖದೀರ್ ಪಾಷಾ ಹಾಗೂ ಸಂಗಡಿಗರು ಸೌದಿಗೆ ತೆರಳುತ್ತಿದ್ದು ಅವರನ್ನು ಹೈದರಾಬಾದ್ ವಿಮಾನ ನಿಲ್ದಾಣ ಕರೆದೊಯ್ದು ಬಿಡಬೇಕಿತ್ತು. ಮಾರ್ಗಮಧ್ಯದ ಕಮಲಾಪುರ ಬಳಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಲ್ಲರೂ ಕಾರಿನಿಂದ ಕೆಳಗಿಳಿದಿದ್ದಾರೆ.
ಈ ಸ್ಥಳದಿಂದ ಸುಮಾರು 50 ಮೀಟರ ದೂರದಲ್ಲಿ ಕಳೆದ ವರ್ಷ ಬಸ್ಗೆ ಬೆಂಕಿ ಹೊತ್ತಿಕೊಂಡು 7 ಜನ ಮೃತಪಟ್ಟಿದ್ದರು.