ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸೋಮಪ್ಪ ಕಡಕೋಳ ಮಾತನಾಡಿ, ‘ಜಿಲ್ಲೆಯಲ್ಲಿ ಅಂಗೀಕಾರ್ ಆಂದೋಲನದಲ್ಲಿ ಒಟ್ಟು 4,048 ಫಲಾನುಭವಿಗಳ ಬಳಿ ತೆರಳಿ ಮಾಹಿತಿ ಸಂಗ್ರಹಣೆ ಮತ್ತು ಅರಿವು ಮೂಡಿಸುವ ಗುರಿ ಹೊಂದಿದ್ದು, ಇದುವರೆಗೆ 2,484 ಫಲಾನುಭವಿಗಳ ಬಳಿಗೆ ಹೋಗಿ ಅರಿವು ಮೂಡಿಸಿ ಶೇ 61.36 ರಷ್ಟು ಸರ್ವೆ ಕಾರ್ಯ ಮುಗಿಸಲಾಗಿದೆ’ ಎಂದ ವಿವರಿಸಿದರು.