‘ನಮ್ಮೂರಿನ ಮಠಕ್ಕೆ ಬಂದ ಗುರುಲಿಂಗ ಅಪ್ಪವರು ನಮ್ಮ ಮನೆಯ ಮಗನಂತೆ ಇದ್ದರು. ಮಠದಲ್ಲಿ ನಿರಂತರವಾಗಿದ್ದು, ಸದಾ ಭಕ್ತರೊಂದಿಗೆ ಮಾತುಕತೆ, ಕುಶಲೋಪರಿ ನಡೆಸುತ್ತಿದ್ದರು. ಮಠಕ್ಕೆ ಬಂದ ಮೇಲೆ ಅಭಿವೃದ್ಧಿ ಕಾರ್ಯಗಳು ನಡೆದವು. ಯಾವುದೇ ಹಮ್ಮು– ಬಿಮ್ಮು ಇಲ್ಲದ ಸರಳ ಸ್ವಭಾವದವರು’ ಎಂದು ಗ್ರಾಮದ ಮುಖಂಡ ಅಣ್ಣಾರಾವ ದಳಪತಿ ಸ್ಮರಿಸಿದರು.