ಏನಿದು ಪ್ರಕರಣ?: ಹವಾ ಮಲ್ಲಿನಾಥ ಅವರ ಸಂಬಂಧಿ, ಆಳಂದ ತಾಲ್ಲೂಕಿನ ಸರಸಂಬಾದ ಮಲ್ಲಯ್ಯ ಮುತ್ಯಾ ಆಶ್ರಮದ ಪ್ರಕಾಶ ಸ್ವಾಮೀಜಿ ಯುವತಿಯೊಬ್ಬರನ್ನು ಪ್ರೀತಿಸಿ ಮದುವೆಯಾಗಿದ್ದರು. 3 ವರ್ಷ ಸಂಸಾರ ನಡೆಸಿದ ಬಳಿಕ ಕೆಳ ಜಾತಿಯವಳು ಎಂದು ಪತ್ನಿಗೆ ವಿಚ್ಛೇದನ ನೀಡಿದರು. ಕಲಬುರಗಿಯಲ್ಲಿನ ಮನೆ ಖಾಲಿ ಮಾಡುವಂತೆ ವಿಚ್ಛೇದಿತ ಪತ್ನಿಗೆ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದರು. ಇದಕ್ಕೆ ಹವಾ ಮಲ್ಲಿನಾಥ ಮುತ್ಯಾ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ಮಹಿಳೆ ಇಬ್ಬರ ವಿರುದ್ಧ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.