ಲಿಂಗಾಯತ ಸಮಾಜದ ಮುಖಂಡರು ಘಟನೆಗೆ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಮದ್ಯದ ಅಮಲಿನಲ್ಲಿದ್ದ ಅಲಿ ಅಬ್ಬಾಸ್ ಎಂಬುವನನ್ನು ಹಿಡಿದು ಜನರು ವಿಚಾರಿಸಿದಾಗ, ಕೃತ್ಯವೆಸಗಿರುವುದು ಒಪ್ಪಿಕೊಂಡ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದರು. ‘ಪಟ್ಟಣದ ಆಶ್ರಯ ಬಡಾವಣೆಯ ನಿವಾಸಿ ಅಲಿ ಅಬ್ಬಾಸ್ಗೆ ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.