‘ಕೊಳ್ಳೂರು, ಗುಡ್ಡೇವಾಡಿ, ಹುಲ್ಲೂರ್, ಹರನಾಳ, ಗಾಣಗಾಪುರ, ದೇಸಾಯಿ ಕಲ್ಲೂರ್, ಕೆರೆಕನಹಳ್ಳಿ, ಬಟಿಗೇರಿ ಗ್ರಾಮಗಳ ಜನ, ಜಾನುವಾರುಗಳಿಗೆ ಕುಡಿಯಲು ನೀರು ಬಿಡುತ್ತೇವೆ ಎಂದು ಆದೇಶಿಸಿದಾಗ ಮಾತ್ರ ಸತ್ಯಾಗ್ರಹ ಹಿಂಪಡೆಯುತ್ತೇವೆ’ ಎಂದು ಪ್ರಾಂತ ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶ್ರೀಮಂತ್ ಬಿರಾದಾರ್ ಹಾಗೂ ತಾಲ್ಲೂಕು ಜಲ ಸಮಿತಿ ಒಕ್ಕೂಟದ ಅಧ್ಯಕ್ಷ ಸಿದ್ದು ದಣ್ಣೂರ ಹೇಳಿದರು.