‘ಕಲ್ಯಾಣ ಪ್ರದೇಶದ ಐವರು ಲೇಖಕರ ಕೃತಿಗಳಿಗೆ ಕನ್ನಡ ಸಾಹಿತ್ಯ ಕೃತಿ ಪ್ರಶಸ್ತಿ ಘೋಷಿಸಲಾಗಿದೆ. ಸಾಹಿತ್ಯ ವಿಭಾಗದಲ್ಲಿ ಲೇಖಕಿ ವಿಜಯಶ್ರೀ ಸಬರದ, ಸಾಂತ್ವನ ವಿಭಾಗದಲ್ಲಿ ಲೇಖಕರಾದ ಮುರಗೆಪ್ಪ ಹಡಪದ ಹಾಗೂ ಮಹಿಪಾಲರೆಡ್ಡಿ ಮುನ್ನೂರು(ಜಂಟಿ ಪ್ರಶಸ್ತಿ), ಸಂಕೀರ್ಣ ವಿಭಾಗದಲ್ಲಿ ಲೇಖಕ ಅಕ್ಬರ್ ಸಿ.ಕಾಲಿಮಿರ್ಚಿ ಹಾಗೂ ಕಥಾ ಸಂಕಲನ ವಿಭಾಗದಲ್ಲಿ ಲೇಖಕ ಮಲ್ಲಿಕಾರ್ಜುನ ಕಡಕೋಳ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ ₹5 ಸಾವಿರ, ಪ್ರಶಸ್ತಿ ಪತ್ರ ಹಾಗೂ ಸತ್ಕಾರವನ್ನು ಒಳಗೊಂಡಿದೆ’ ಎಂದು ವಿವರಿಸಿದರು.