ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಮೆರವಣಿಗೆಯಲ್ಲಿ ಕೃತಕ ಆನೆಯ ಮೇಲೆ ಸವಾರಿ ಮಾಡಿದರು. ಮಾರ್ಗದ ಉದ್ದಕ್ಕೂ ಪಕ್ಷದ ಬಾವುಟ ಹಿಡಿದು ಪ್ರದರ್ಶಿದರು. ಡಿ.ಸಿ. ಕಚೇರಿ ಮುಂಭಾಗದಲ್ಲಿ ಆನೆಯಿಂದ ಕೆಳಗೆ ಇಳಯುವಂತೆ ಬೆಂಬಲಿಗರು ಹೇಳಿದರು. ಅವರ ಮಾತನ್ನು ಕೇಳದೆ ಆನೆ ಮೇಲೆ ಕುಳಿತೇ ಕಚೇರಿ ಪ್ರವೇಶ ಮಾಡುವುದಾಗಿ ಹೇಳಿ, ಒಳ ಹೋದರು.