ಇರ್ಫಾನ್ ಉದ್ಯೋಗ ಆಕಾಂಕ್ಷಿಗಳನ್ನು ವಿದೇಶಕ್ಕೆ ಕಳುಹಿಸುವ ಏಜೆಂಟ್ ಎಂದು ಆಸಿಫ್ ಎಂಬಾತ ರಾಜಶೇಖರ ಕಾಶಿರಾಯ, ಅಶೋಕ ಚಿಂಚನಸೂರ ಸೇರಿದಂತೆ 15 ಮಂದಿ ಉದ್ಯೋಗ ಆಕಾಂಕ್ಷಿಗಳಿಗೆ ಪರಿಚಯಿಸಿದ್ದ. ಸಂತ್ರಸ್ತರಲ್ಲಿ ವಿದೇಶಕ್ಕೆ ಕಳುಹಿಸುವ ಆಸೆ ಹುಟ್ಟಿಸಿದ್ದ ಇರ್ಫಾನ್, ಪ್ರತಿಯೊಬ್ಬರಿಗೆ ₹ 1 ಲಕ್ಷ ಖರ್ಚಾಗುತ್ತದೆ ಎಂದಿದ್ದ. ಬಳಿಕ ಅವರೆಲ್ಲರಿಂದ ಮುಂಗಡವಾಗಿ ₹ 11.20 ಲಕ್ಷ ಪಡೆದು, ವೀಸಾ ಮಾಡಿಸಿಕೊಡದೆ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.