ಈ ಕುರಿತು ಡಿಸೆಂಬರ್ 30ರಂದು ಪತ್ರ ಬರೆದಿರುವ ಅವರು, ‘10 ವರ್ಷಗಳ ಹಿಂದೆ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಮಂಜೂರಾಗಿದ್ದು ಹೊರತುಪಡಿಸಿದರೆ ಹೆಚ್ಚಿನ ಕೆಲಸಗಳು ಆಗಿಲ್ಲ. ದಶಕದ ಹಿಂದೆಯೇ ಯಾದಗಿರಿ ಜಿಲ್ಲೆಯ ಸೈದಾಪುರದಲ್ಲಿ ರೈಲ್ವೆ ಕೋಚ್ ಕಾರ್ಖಾನೆ ಮಂಜೂರಾಗಿದೆ. ಆದರೆ ಇನ್ನೂ ಕಾರ್ಯಾರಂಭ ಮಾಡಿಲ್ಲ. ಹಲಕರ್ಟಿ ಸ್ಟೇಷನ್ಗೆ ತೆರಳುವ ರೈಲುಗಳನ್ನು ವಾಡಿ ಜಂಕ್ಷನ್ಗೂ ಬರುವಂತೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.