ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಜಿಟಿ ಜಿಟಿ ಮಳೆಯಲ್ಲೂ ಪಟಾಕಿ ಸಿಡಿಸಿ ಜಯಘೋಷ ಕೂಗಿ ಸಂಭ್ರಮಿಸಿದರು. ಬಿಜೆಪಿ ಮುಖಂಡ ಸಂತೋಷ ಗಡಂತಿ, ಕೆ.ಎಂ.ಬಾರಿ, ಆಕಾಶ ಕೊಳ್ಳೂರು, ನೀಲಕಂಠ ರಾಠೋಡ, ಚಂದ್ರಶೆಟ್ಟಿ ಜಾಧವ, ವಿಜಯಕುಮಾರ ರಾಠೋಡ, ಪಂಡರಿ ಲೊಡ್ಡನೋರ, ನಾರಾಯಣ ಚವ್ಹಾಣ, ಶ್ರೀಮಂತ ಕಟ್ಟಿಮನಿ, ಶಿವಕುಮಾರ ಪೋಚಾಲಿ, ನಾರಾಯಣ ನಾಟಿಕಾರ, ಶ್ರೀನಿವಾಸ ಚಿಂಚೋಳಿಕರ, ಹಣಮಂತ ಪೂಜಾರಿ ಮೊದಲಾದವರು ಹಾಜರಿದ್ದರು.