ಪಟ್ಟಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಸಂಪೂರ್ಣವಾಗಿ ಅವರು ತಿಳಿದುಕೊಳ್ಳದೆ, ವಿನಾಕಾರಣ ಆರೋಪ ಮಾಡಿರುವುದು ಸೂಕ್ತವಾದುದಲ್ಲ. ನಾಗಪುರದಲ್ಲಿನ ಆರ್.ಎಸ್.ಎಸ್ ಕಚೇರಿಗೆ ನಾನು ಹೋಗಿದ್ದೆ, ಆಗ ನನಗೆ ಪ್ರವೇಶ ನಿರಾಕರಿಸಿರಲಿಲ್ಲ. ಅಲ್ಲಿ ಯಾವುದೇ ರೀತಿಯ ಜಾತಿಯ ಪ್ರಶ್ನೆಯೇ ಉದ್ಭವಿಸಿರಲಿಲ್ಲ. ಆರ್.ಎಸ್.ಎಸ್ ಕಚೇರಿ ಪ್ರವೇಶಕ್ಕೆ ಯಾವುದೇ ನಿರ್ಭಂಧವಿಲ್ಲ. ಎಲ್ಲ ಜನಾಂಗದವರಿಗೂ ಮುಕ್ತ ಅವಕಾಶವಿದೆ. ಆರ್.ಎಸ್.ಎಸ್ ಎಂದಿಗೂ ದಲಿತರನ್ನು ಅವಮಾನಿಸಿಲ್ಲ. ಸೇಡಂನಲ್ಲಿ ಡಿಸೆಂಬರ್ 01 ರಂದು ನಡೆದ ವಿಶ್ವಹಿಂದು ಪರಿಷತ್ ದೀಪಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಸರ್ವ ಜಾತಿ ಜನಾಂಗದ ಮಹಿಳೆಯರು ಆಗಮಿಸಿದ್ದರು. ಜಾತ್ಯತೀತವಾಗಿ ಆರ್.ಎಸ್. ಎಸ್ ಬೆಳೆದಿದ್ದು, ಸಂಪೂರ್ಣವಾಗಿ ಒಳಮೀಸಲಾತಿ ಅಧ್ಯಯನ ಮಾಡಿದ್ದೆ ಸಂಘ’ ಎಂದರು.