ಡಿಎನ್ಎ ಟೆಸ್ಟ್ ಮಾಡಿಸೋಣ. ಯಾರ್ಯಾರೆಲ್ಲ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂಬುದನ್ನು ಡಿಎನ್ಎ ಕಿಟ್ ಮುಂದೆ ಇಟ್ಟುಕೊಂಡು ಚರ್ಚಿಸೋಣ ಬನ್ನಿ. ಸದಾನಂದ ಗೌಡ, ಕೆ.ಎಸ್.ಈಶ್ವರಪ್ಪ ಹಾಗೂ ಅನಂತಕುಮಾರ ಹೆಗಡೆ ಅವರು ‘ಬಿಜೆಪಿ ಒಂದು ಕುಟುಂಬದ ಹಿಡಿತದಲ್ಲಿದೆ. ಪಕ್ಷದ ಶುದ್ಧೀಕರಣಕ್ಕಾಗಿ ಹೊರಬಂದು ಹೋರಾಟ ಮಾಡಬೇಕಿದೆ’ ಎನ್ನುತ್ತಿದ್ದಾರೆ. ಇದ್ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದ ರಾಜ್ಯ ಬಿಜೆಪಿ ನಾಯಕರು, ಕಾಂಗ್ರೆಸ್ಸಿನ ಆಂತರಿಕ ವಿಷಯಗಳಿಗೆ ತಲೆ ಹಾಕುತ್ತಿದ್ದಾರೆ. ಬಿಜೆಪಿಯವರು ಅಧಿಕಾರಕ್ಕೆ ಬಂದು ಹತ್ತು ವರ್ಷ ಕಳೆದರೂ ದೇವರು ಮತ್ತು ಧರ್ಮದ ಹೆಸರಿನಲ್ಲಿ ಮತಯಾಚಿಸುತ್ತಿದ್ದಾರೆ. ಚುನಾವಣೆಯಲ್ಲಿ ಹೇಳಿಕೊಳ್ಳುವಂತಹ ಸ್ವಂತ ಸಾಧನೆ ಬಿಜೆಪಿಯವರ ಬಳಿ ಇಲ್ಲ.