ನಾರಾಯಣಪುರ ಜಲಾಶಯ 33 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದು ರಾಯಚೂರು, ಯಾದಗಿರಿ, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಒದಗಿಸುತ್ತದೆ. ರಾಯಚೂರು ಜಿಲ್ಲೆಯು ಆಂಧ್ರಪ್ರದೇಶ ಹಾಗೂ ತೆಲಂಗಾಣದೊಂದಿಗೆ ಗಡಿ ಹಂಚಿಕೊಂಡಿದ್ದು, ಅಲ್ಲಿ ನಕ್ಸಲ್ ಪ್ರಭಾವ ಇದೆ. ರೈತರ ಪ್ರತಿಭಟನೆಗಳೂ ನಡೆಯುತ್ತವೆ. ಆದ್ದರಿಂದ ಕೆಎಸ್ಐಎಸ್ಎಫ್ ಭದ್ರತೆ ಒದಗಿಸುವುದು ಸೂಕ್ತ. ಭದ್ರತೆ ವಾಪಸ್ ಪಡೆಯುವುದರಿಂದ ಭದ್ರತಾ ಪಡೆಯಲ್ಲಿರುವ ಈ ಭಾಗದವರಿಗೆ ಸ್ಥಳ ನಿಯೋಜನೆ ಹಾಗೂ ಮುಂಬಡ್ತಿಯಲ್ಲಿ ಅನ್ಯಾಯವಾಗಲಿದೆ. ಆದ್ದರಿಂದ ಜಲಾಶಯಕ್ಕೆ ಕೆಎಸ್ಐಎಸ್ಎಫ್ ಭದ್ರತೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.