ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಣಸಿನಕಾಯಿ ಬೆಳೆದು ಬರ ಗೆದ್ದ ರೈತ!

Published 31 ಡಿಸೆಂಬರ್ 2023, 6:06 IST
Last Updated 31 ಡಿಸೆಂಬರ್ 2023, 6:06 IST
ಅಕ್ಷರ ಗಾತ್ರ

ಯಡ್ರಾಮಿ: ಬರಗಾಲದಲ್ಲೂ ತಾಲ್ಲೂಕಿನ ಸುಂಬಡ ಗ್ರಾಮದ ರೈತ ಮಲ್ಲು ಚೌದ್ರಿ ತಮ್ಮ 2 ಎಕರೆ ಜಮೀನಿನಲ್ಲಿ ಕಾಲುವೆ ನೀರಿನ ಮೂ ಮೂಲಕ ಮೆಣಸಿನಕಾಯಿ ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದಾರೆ. 

ಪ್ರತಿ ವರ್ಷ ಹತ್ತಿ, ತೊಗರಿ ಬೆಳೆಯುತ್ತಿದ್ದ ಮಲ್ಲು ಅವರು ಉತ್ತಮ ಬೆಲೆ ಸಿಗದ ಕಾರಣ ಈ ವರ್ಷ ಮೆಣಸಿನಕಾಯಿ ಬೆಳೆದಿದ್ದು 18 ರಿಂದ 20 ಕ್ವಿಂಟಾಲ್ ಇಳುವರಿ ನಿರೀಕ್ಷೆಯಿದೆ.

ಮೆಣಸಿನಕಾಯಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದ್ದರಿಂದ ಮಲ್ಲು ಚೌದ್ರಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ಸದ್ಯ ಭರಪೂರ ಫಸಲು ಬಂದಿದೆ. 

ಎರಡು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಹಾಕಿ ₹3 ಲಕ್ಷ ಖರ್ಚು ಮಾಡಿದ್ದೇನೆ ಈಗ ಉತ್ತಮ ಬೆಲೆ ಇದೆ. ಆದರೆ ಕಟಾವು ಮಾಡಿದ ಬಳಿಕ ಆಗ ಎಷ್ಟು ದರವಿರುತ್ತದೆ ಎಂಬ ಭಯವಿದೆ. ಹೆಚ್ಚಿನ ಲಾಭ ನಿರೀಕ್ಷೆಯಲ್ಲಿದ್ದೇವೆ.
ಮಲ್ಲು ಚೌದ್ರಿ, ರೈತ

‘ಪ್ರತಿ ಎಕರೆಗೆ ಬೀಜ, ಗೊಬ್ಬರ, ಕೀಮಿನಾಶಕ ಹಾಗೂ ವೆಚ್ಚ ಸೇರಿ ₹1.50 ಲಕ್ಷ ಖರ್ಚಾಗುತ್ತದೆ. ಪಟ್ಟಣ ಸುತ್ತ ಬೆಳೆದ ಬೆಳೆ ಸೋಲಾಪುರ ಸೇರಿ ವಿವಿಧ ಭಾಗಗಳಲ್ಲಿ ಮಾರಾಟವಾಗುತ್ತದೆ. ಸೋಲಾಪುರದಲ್ಲಿ ಮೆಣಸಿನಕಾಯಿಗೆ ಸದ್ಯ ಕ್ವಿಂಟಾಲ್‍ಗೆ ₹20 ಸಾವಿರ ದರವಿದೆ’ ಎಂದು ರೈತ ಮಲ್ಲು ಪ್ರಜಾವಾಣಿಗೆ ತಿಳಿಸಿದರು.

ಜೆರಟಗಿಯಿಂದ ಮೆಣಸಿನಕಾಯಿ ಸಸಿ ತಂದು ನಾಟಿ ಮಾಡಿದ್ದಾರೆ. ಸಸಿ ಹಚ್ಚಲು ₹10 ಸಾವಿರ ಖರ್ಚಾಗಿದೆ. ಪ್ರತಿ ಎಕರೆಗೆ 13 ಸಾವಿರದಿಂದ 14 ಸಾವಿರ ಸಸಿ ಬೇಕಾಗುತ್ತವೆ.

ಈಗಾಗಲೇ 35 ಚೀಲ ಗೊಬ್ಬರ ಹಾಕಲಾಗಿದೆ. ಮೂರು ತಿಂಗಳಲ್ಲಿ 25 ಬಾರಿ ಕೀಟನಾಶ ಸಿಂಪಡಣೆ ಮಾಡಲಾಗಿದೆ. ಕೀಟನಾಶಕಕ್ಕೆ ₹5 ಸಾವಿರ, ಕಳೆ ತಗಿಯಲು ₹25 ಸಾವಿರ ಸೇರಿ ಒಟ್ಟು ಎರಡು ಎಕರೆಗೆ ₹3 ಲಕ್ಷ ಖರ್ಚು ಮಾಡಲಾಗಿದೆ. ಈಗ ಕಾಲುವೆ ನೀರು ಬಂದ್ ಆಗಿ 12 ದಿನಗಳು ಕಳೆದಿದ್ದು ಈಗ ಮೆಣಸಿನಕಾಯಿಗೆ ನೀರಿನ ಸಮಸ್ಯೆ ಎದುರಾಗಿ ಹಳ್ಳದ ನೀರು ಬಿಡುತ್ತಿದ್ದಾರೆ. ಒಂದು ಎಕರೆಗೆ 15 ರಿಂದ 20 ಕ್ವಿಂಟಾಲ್ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT