ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ
ಜೇವರ್ಗಿ ತಾಲ್ಲೂಕಿನ ನಿರನಕೋಡ ಗ್ರಾಮದಲ್ಲಿ ಮಂಗಳವಾರ ರಾತ್ರಿ ತಂದೆ ಮತ್ತು ಇಬ್ಬರು ಮಕ್ಕಳ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ಮಾಡಲಾಗಿದೆ.
ಶೇಶಪ್ಪಪ್ಪಗೌಡ, ಕನ್ಮಯ್ಯ ಮತ್ತು ಬಿಳಿಯಾನ ಸಿದ್ದ ಒಡೆಯರ್ ಹಲ್ಲೆಗೆ ಒಳಗಾದವರು. ಬಿಳಿಯಾನ ಸಿದ್ದ ಒಡೆಯರ್ ಅವರ ಇಬ್ಬರು ಸಹೋದರರು ಮತ್ತು ಅವರ ಮಕ್ಕಳು ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಯೋಗಿಯಪ್ಪ ಒಡೆಯರ್, ಮಲ್ಲಪ್ಪ ಒಡೆಯರ್, ಸಿದ್ದರಾಮ , ಲಕ್ಷ್ಮಿಪುತ್ರ, ಸೋಮಲಿಂಗ್ ಭೂತನ ಸಿದ್ದ ಒಡೆಯರ್ ಹಲ್ಲೆ ಮಾಡಿದ ಆರೋಪಿಗಳು.
ಮಲ್ಲಪ್ಪ ಒಡೆಯರ್ ಹೆಸರಲ್ಲಿ ಇರುವ ಮೂರು ಎಕರೆ ಜಮೀನು ಪೈಕಿ ಒಂದೂವರೆ ಎಕರೆ ಜಮೀನು ನೀಡುವಂತೆ ಬಿಳಿಯಾನಸಿದ್ದ ಕೇಳಿದ್ದ. ಜಮೀನು ಕೇಳಿದಕ್ಕೆ ತಂದೆ ಮತ್ತು ಮಕ್ಕಳ ಮೇಲೆ ಹಲ್ಲೆ ಮಾಡಲಾಗಿದೆ. ತೀವ್ರವಾಗಿ ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.