ಮಾರ್ಚ್ 27ರಂದು ಕೃಷ್ಣಾ ನದಿಯ ನೀರನ್ನು ನಾರಾಯಣಪುರ ಜಲಾಶಯದಿಂದ ಕೆಬಿಜೆಎನ್ಎಲ್ನ ಇಂಡಿ ಶಾಖಾ ಕಾಲುವೆ ಮೂಲಕ 1 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಲಾಗಿತ್ತು. ಭಾನುವಾರ ಸಂಜೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಮಿರಗಿ ಸಮೀಪದ ಭೀಮಾ ನದಿ ಸೇರಿದ ಕೃಷ್ಣೆಯ ನೀರು, ಕಲಬುರಗಿ ಗಡಿಯತ್ತ ಸಾಗಿ, ತಡರಾತ್ರಿ ಅಫಲಜಲಪುರದ ಸೊನ್ನ ಭೀಮಾ ಬ್ಯಾರೇಜ್ ತಲುಪಿತು.