ಕಿಟ್ಟಾಚಾರ್ ಅವರ ಗದ್ದೆಯ ಕೊಯ್ಲು ಕೆಲಸಕ್ಕೆ ಗುರುವಾರ ಹೋಗಿದ್ದ ಪ್ರಸಾದ್, ಭತ್ತದ ಹುಲ್ಲಿನ ಕಟ್ಟುಗಳನ್ನು ಶಶಿ ಎಂಬುವರ ಕಣಕ್ಕೆ ಸಾಗಿಸುತ್ತಿದ್ದರು. ಅಲ್ಲಿ ಚಂದ್ರಪ್ಪ ಮಾಸ್ಟರ್ ಎಂಬುವರು ಇಟ್ಟಿದ್ದ ಒಕ್ಕಣೆ ಯಂತ್ರಕ್ಕೆ ಭತ್ತದ ಹುಲ್ಲಿನ ಕಟ್ಟುಗಳನ್ನು ಹಾಕುತ್ತಿದ್ದರು. ಕರಿ ಭಾಸ್ಕರಾಚಾರ್ ಎಂಬುವರು ಯಂತ್ರದ ಮೇಲುಸ್ತುವಾರಿ ವಹಿಸಿದ್ದರು. ಪ್ರಸಾದ್ ಅವರು ಯಂತ್ರದ ಮೇಲೆ ನಿಂತು ಹುಲ್ಲಿನ ಕಟ್ಟುಗಳನ್ನು ಹಾಕುತ್ತಿದ್ದರು. ಈ ವೇಳೆ ಹುಲ್ಲಿನ ಕಟ್ಟನ್ನು ಎಡಗಾಲಿನಿಂದ ಬಲವಾಗಿ ತಳ್ಳಿದಾಗ ಕಾಲು ಯಂತ್ರಕ್ಕೆ ಸಿಲುಕಿ ತುಂಡಾಗಿದೆ. ಈ ವೇಳೆ, ಕಾರ್ಮಿಕರು ಪ್ರಸಾದ್ ಅವರನ್ನು ಹೊರಗೆಳೆದಿದ್ದರು.