ಬಿಜೆಪಿ ಅಭ್ಯರ್ಥಿಯಾಗಿದ್ದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಾವೊಬ್ಬ ರಾಜವಂಶಸ್ಥ, ಸಾಮಾನ್ಯರಿಗೆ ನಿಲುಕುವುದಿಲ್ಲ ಎಂಬ ಆರೋಪದಿಂದ ಕಳಚಿಕೊಳ್ಳಲು ಕೊಡಗಿನಲ್ಲಿಯೇ ಪ್ರಯತ್ನ ನಡೆಸಿದ್ದರು. ಹೆಚ್ಚು ಅಬ್ಬರದ ಮಾತುಗಳಿಲ್ಲದೇ, ಭಾಷಣದ ಆಡಂಬರ ಇಲ್ಲದೇ ಮೌನವಾಗಿಯೇ ತಮ್ಮ ಗೆಲುವಿಗೆ ಕಸರತ್ತು ನಡೆಸಿದ್ದರು. ರಸ್ತೆಬದಿ ಕಾರು ನಿಲ್ಲಿಸಿ, ತಾವೇ ಸ್ವತಃ ಹೋಗಿ ಎಳನೀರು ಸೇವಿಸುವ ಮೂಲಕ ಸಾಮಾನ್ಯರೊಂದಿಗೆ ಬೆರೆಯುತ್ತೇನೆ ಎಂಬ ಸಂದೇಶವನ್ನು ಮುಗುಮ್ಮಾಗಿಯೇ ರವಾನಿಸಿದ್ದರು.