ಹಾರಂಗಿ ಜಲಾಶಯ ಮತ್ತು ನದಿ ದಂಡೆಯಲ್ಲಿನ ಹೂಳು ತೆಗೆಯಲು ಜೂ.14ರಂದು ಟೆಂಡರ್ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಟೆಂಡರ್ ಷರತ್ತುಗಳನ್ನು ಪೂರೈಸಲು ಯಾರೊಬ್ಬರು ಭಾಗಿಯಾಗದ ಕಾರಣ ಹೊಸದಾಗಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ನಿಗಮದ ಪರ ವಕೀಲರು ಪೀಠಕ್ಕೆ ತಿಳಿಸಿದರು. ಈ ಪ್ರಕ್ರಿಯೆಗೂ ಮೊದಲು ನೀರಿ ಸಂಸ್ಥೆಯಿಂದ ಸಲಹೆ ಪಡೆಯುವ ಬಗ್ಗೆ ನಿಲುವು ತಿಳಿಸಬೇಕು ಎಂದು ಸೂಚಿಸಿದ ಪೀಠ, ವಿಚಾರಣೆಯನ್ನು ಆ.24ಕ್ಕೆ ಮುಂದೂಡಿತು.