ಸ್ಟೋನ್ ಹಿಲ್ನಲ್ಲಿರುವ ತ್ಯಾಜ್ಯ ವಿಲೇವಾರಿ ಕುರಿತು ಟೆಂಡರ್ ಪ್ರಕ್ರಿಯೆ ಇನ್ನೂ ನಡೆದಿಲ್ಲ ಎಂದು ಬಿಜೆಪಿ ಸದಸ್ಯ ಅಪ್ಪಣ್ಣ ಅಸಮಾಧಾನ ವ್ಯಕ್ತಪಡಿಸಿದರೆ, ಗಾಂಧಿ ಮೈದಾನವನ್ನು ವಾಣಿಜ್ಯ ಉದ್ದೇಶಕ್ಕೆ ಬಾಡಿಗೆಗೆ ನೀಡುವ ವಿಚಾರವನ್ನ ಸದಸ್ಯರ ಗಮನಕ್ಕೆ ತಂದಿಲ್ಲ ಎಂದು ರಮೇಶ್ ಹಾಗೂ ಇನ್ನಿತರ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಗಾಂಧಿ ಮೈದಾನ ಬಾಡಿಗೆಗೆ ನೀಡಿರುವುದರಿಂದ ನಿತ್ಯ ₹ 10 ಸಾವಿರ ಆದಾಯ ಬರುತ್ತಿದೆ ಎಂದು ಆಯುಕ್ತ ವಿಜಯ್ ಹೇಳಿದರೂ, ‘ಇನ್ನು ಮುಂದೆ ದೀರ್ಘ ಅವಧಿಗೆ ಬಾಡಿಗೆಗೆ ಕೊಡುವಾಗ ಕೌನ್ಸಿಲ್ ಗಮನಕ್ಕೆ ತರಬೇಕು’ ಎಂದು ಸದಸ್ಯರು ಒತ್ತಾಯಿಸಿದರು.