ತೇಪೆ ಕಾಣದ ರಸ್ತೆ: ಕಳೆದ ಕೆಲವು ವರ್ಷಗಳಿಂದಲೂ ಸಿದ್ದಾಪುರ-ವಿರಾಜಪೇಟೆ ರಸ್ತೆ ತೀರಾ ಹದಗೆಟ್ಟಿದ್ದು, ರಸ್ತೆಯ ಡಾಂಬರೀಕರಣಕ್ಕೆ ಒತ್ತಾಯ ಕೇಳಿ ಬಂದಿತ್ತು. ಆದರೆ, ವರ್ಷಗಳು ಕಳೆದರೂ ರಸ್ತೆಯ ಡಾಂಬರೀಕರಣ ಇನ್ನೂ ನಡೆದಿಲ್ಲ. ಇಂಜಲಗರೆ, ಆನಂದಪುರ, ಅಮ್ಮತ್ತಿ, ಕಾವಾಡಿ ಗ್ರಾಮಗಳಲ್ಲಿ ರಸ್ತೆಯಲ್ಲಿ ಡಾಂಬರು ಇಲ್ಲದೇ ಗುಂಡಿಗಳು ನಿರ್ಮಾಣವಾಗಿದೆ. ಆನಂದಪುರದಿಂದ ಇಂಜಲಗೆರೆಗೆ ತೆರಳುವ ಭಾಗದಲ್ಲಿ ರಸ್ತೆ ಮತ್ತಷ್ಟು ಹದಗೆಟ್ಟಿದ್ದು, ಬಹುತೇಕ ಹೊಂಡಗಳಿಂದ ಕೂಡಿದೆ.