ಬಿಜೆಪಿ ವಕ್ತಾರ ಟಿ.ಎ.ಕಿಶೋರ್ಕುಮಾರ್ ಮಾತನಾಡಿ, ‘ಹಿಂದೆ ನಮ್ಮ ಶಾಸಕರು ಮಾಡಿರುವ ಅಭಿವೃದ್ಧಿ ಕೆಲಸಗಳಿಗೆ ಮತ್ತೆ ಭೂಮಿಪೂಜೆ ಮಾಡುವುದು, ಒಂದೇ ರಸ್ತೆಯನ್ನು ಎರಡು ಬಾರಿ ಉದ್ಘಾಟಿಸುವಂತಹ ಕೆಲಸಗಳನ್ನೇ ಈಗಿನ ಶಾಸಕರು ಮಾಡಿದ್ದಾರೆ. ಬಿಜೆಪಿಯ ಹಿಂದಿನ ಇಬ್ಬರು ಶಾಸಕರು ಮಾಡಿರುವ ಕೆಲಸಗಳ ಬಗ್ಗೆ ಶ್ವೇತಪತ್ರ ಹೊರಡಿಸಲಾಗಿದೆ’ ಎಂದರು.