ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಯಲ್ಲಿ ಮುಳುಗಿ ಇಬ್ಬರು ಕಾರ್ಮಿಕರ ಸಾವು

Last Updated 18 ಫೆಬ್ರುವರಿ 2020, 9:16 IST
ಅಕ್ಷರ ಗಾತ್ರ

ಮಡಿಕೇರಿ: ದಕ್ಷಿಣ ಕೊಡಗಿನ ಬಿರುನಾಣಿ ಸಮೀಪದ ತೆರಾಲು ಗ್ರಾಮದ ಬೊಳ್ಳೇರ ಪೊನ್ನಪ್ಪ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಕೆರೆಯಲ್ಲಿ ಮುಳುಗಿ ಸೋಮವಾರ ಸಾವನ್ನಪ್ಪಿದ್ದಾರೆ.

ವಿನೋದ್ (23) ಹಾಗೂ ಪುಟ್ಟ (22) ಸಾವನ್ನಪ್ಪಿದ್ದ ಕಾರ್ಮಿಕರು.

ಸಂಜೆ ವೇಳೆ ವಿನೋದ್‌ ಅವರ ಪತ್ನಿ ಕೆರೆ ಬಳಿ ಬಟ್ಟೆ ತೊಳೆಯುತ್ತಿದ್ದರು. ಅಲ್ಲಿಗೆ ಪುಟ್ಟ ತೆರಳಿದ್ದರು. ಆಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಪುಟ್ಟ ಮುಳುಗುತ್ತಿರುವುದನ್ನು ಗಮನಿಸಿ ಕಾಪಾಡಲು ವಿನೋದ್‌ ಸಹ ಕೆರೆಗೆ ಧುಮ್ಮಿಕ್ಕಿದ್ದಾರೆ. ಆದರೆ, ಕೆರೆಯಲ್ಲಿ ಅ‍ಪಾರ ಪ್ರಮಾಣದ ಹೂಳು ತುಂಬಿದ್ದರ ಪರಿಣಾಮ ಇಬ್ಬರಿಗೂ ಮೇಲೆ ಬರಲು ಸಾಧ್ಯವಾಗದೇ ನೀರುಪಾಲಾಗಿದ್ದಾರೆ.

ಸ್ಥಳಕ್ಕೆ ಕುಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಕುಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT