ಸಂಜೆ ವೇಳೆ ವಿನೋದ್ ಅವರ ಪತ್ನಿ ಕೆರೆ ಬಳಿ ಬಟ್ಟೆ ತೊಳೆಯುತ್ತಿದ್ದರು. ಅಲ್ಲಿಗೆ ಪುಟ್ಟ ತೆರಳಿದ್ದರು. ಆಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಪುಟ್ಟ ಮುಳುಗುತ್ತಿರುವುದನ್ನು ಗಮನಿಸಿ ಕಾಪಾಡಲು ವಿನೋದ್ ಸಹ ಕೆರೆಗೆ ಧುಮ್ಮಿಕ್ಕಿದ್ದಾರೆ. ಆದರೆ, ಕೆರೆಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿದ್ದರ ಪರಿಣಾಮ ಇಬ್ಬರಿಗೂ ಮೇಲೆ ಬರಲು ಸಾಧ್ಯವಾಗದೇ ನೀರುಪಾಲಾಗಿದ್ದಾರೆ.