ದಲಿತ ಮುಖಂಡ ಬೆಳಮಾರನಹಳ್ಳಿ ಆನಂದ್ ಅವರ ಜನ್ಮದಿನವನ್ನು ನಗರದ ಡೂಂಲೈಟ್ ವೃತ್ತದಲ್ಲಿ ಸೋಮವಾರ (ಮೇ 20) ರಾತ್ರಿ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಆಚರಣೆ ಮಾಡಲಾಗಿತ್ತು. ಆನಂದ್ ಹಿಂಬಾಲಕ ಬಸವನತ್ತ ರವಿಕುಮಾರ್ ಎಂಬುವರು ಆಯೋಜನೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಚಂಬೆ ರಾಜೇಶ್, ಪೇಟೆಚಾಮನಹಳ್ಳಿ ಸುಬ್ಬು, ಕೆಎಚ್ಬಿ ಕಾಲೊನಿಯ ಆಟೋ ಶಿವು, ಹಾರೋಹಳ್ಳಿ ಆನಂದ್, ದೊಡ್ಡೂರು ಕರಪನಹಳ್ಳಿ ಅಂಬರೀಶ್ ಮತ್ತಿತರರು ಪಾಲ್ಗೊಂಡಿದ್ದರು.